ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಡಾ. ರಾಹುಲ್ ಜಿ. ಅಭಿಮತ;

ಪುತ್ತೂರು: ನಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ
ರೂಪಿಸಿಕೊಳ್ಳಲು ಹಲವಾರು ಅವಕಾಶಗಳಿವೆ. ಆದರೆ
ಅವಕಾಶ ಎಂದಿಗೂ ನಮ್ಮನ್ನು ಹುಡುಕಿಕೊಂಡು
ಬರುವುದಿಲ.್ಲ ಸದಾವಕಾಶ ಸಿಕ್ಕಾಗ ಅದನ್ನು
ಸದುಪಯೋಗಗೊಳಿಸಿಕೊಳ್ಳಬೇಕು. ನಮ್ಮ ದೇಶದ,
ಜಗತ್ತಿನ ಭವಿಷ್ಯವನ್ನು ನಿರ್ಧರಿಸುವವರು ವಿದ್ಯಾರ್ಥಿಗಳು.
ಆದ್ದರಿಂದ ವಿದ್ಯಾರ್ಥಿಗಳು ಸಮಯ ವ್ಯರ್ಥ ಮಾಡದೆ ತಮ್ಮ
ಗುರಿಯತ್ತ ಯೋಚಿಸಬೇಕು ಎಂದು ದಂತ
ವೈದ್ಯರಾಗಿರುವ ಮಂಗಳೂರಿನ ರಾಮಕೃಷ್ಣ ಮಿಷನ್
ಇದರ ತರಬೇತುದಾರ ಡಾ. ರಾಹುಲ್ ಜಿ. ಟಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ
ಮತ್ತು ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ),
ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ,
ವಿವೇಕಾನAದ ಸಂಶೋಧನ ಕೇಂದ್ರ ಮತ್ತು ಐಕ್ಯೂಎಸಿ
ಘಟಕದ ಸಹಭಾಗಿತ್ವದಲ್ಲಿ ಆಯೋಜಿಸಿದ ಜಗತ್ತಿಗೆ
ಭಾರತದ ಆಧ್ಯಾತ್ಮಿಕ ಚಿಂತನೆಯನ್ನು ಪರಿಚಯಿಸಿದ
ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದ ಕುರಿತಾದ ಚಿಂತನೆಗಳ
ಉಪನ್ಯಾಸ ಮಾಲಿಕೆ, ವಿವೇಕ ಸ್ಮೃತಿ ಕಾರ್ಯಕ್ರಮದ 18
ರ ಸಂಚಿಕೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ
ಮಾತನಾಡಿದರು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ
ಮಾತನಾಡಿದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿಕೃಷ್ಣ. ಕೆ. ಎನ್, ಶಿಕ್ಷಣ ಪಡೆಯುವುದು ಎಂದರೆ
ನಮ್ಮತನವನ್ನು ಕಳೆದುಕೊಳ್ಳುವುದಲ್ಲ ಬದಲಾಗಿ
ಜ್ಞಾನವನ್ನು ಪಡೆದುಕೊಂಡು ಬೌದ್ಧಿಕವಾಗಿ, ಶಾರೀರಿಕವಾಗಿ
ವಿಕಾಸಗೊಳ್ಳುವುದು. ಮನುಷ್ಯ ಜನ್ಮ ಬಹುದೊಡ್ಡದು
ಅದನ್ನು ಹಾಳು ಮಾಡದಿರಿ ಎಂಬ ಪುರಂದರದಾಸರ
ವಚನದAತೆ, ಮಾನವ ಜನ್ಮ ಸಾರ್ಥಕವಾಗುವಂತೆ
ಬದುಕಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಶ್ರೀಧರ್
ನಾಯ್ಕ್ ಬಿ, ಉಪ ಪ್ರಾಂಶುಪಾಲ ಪ್ರೊ.ಶ್ರೀಕೃಷ್ಣ ಗಣರಾಜ್
ಭಟ್,ಸ್ನಾತಕೋತ್ತರ ಪದವಿ ಅಧ್ಯಯನ ಮತ್ತು
ಸಂಶೋಧನಾ ಕೇಂದ್ರದ ಸಂಯೋಜಕಿ ಡಾ. ವಿಜಯ
ಸರಸ್ವತಿ, ಭಾರತೀಯ ಸಂಸ್ಕೃತಿ ಮತ್ತು ಲಲಿತಾ ಕಲೆಗಳ
ಅಧ್ಯಯನ ಕೇಂದ್ರದ ಸಂಯೋಜಕಿ ಹಾಗೂ
ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ವಿದ್ಯಾ. ಎಸ್
ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಆಂಗ್ಲಭಾಷ
ವಿಭಾಗದ ಮುಖ್ಯಸ್ಥ ಬಾಲಕೃಷ್ಣ.ಎಚ್ ಸ್ವಾಗತಿಸಿ,
ಸಸ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಡಾ.ಸೌಮಿತ್ರ.ಕೆ ವಂದಿಸಿ,
ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಗೀತಾ ಕುಮಾರಿ.ಟಿ
ನಿರ್ವಹಿಸಿದರು.
