
ಪುತ್ತೂರು : ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ
(ಸ್ವಾಯತ್ತ) ಮಹಾವಿದ್ಯಾಲಯ ಇದರ ರಾಜ್ಯಶಾಸ್ತ್ರ ವಿಭಾಗದ
ವತಿಯಿಂದ ಬೆಂಗಳೂರು ವಿಧಾನ ಸೌಧದಲ್ಲಿ ನಡೆದ ಬಜೆಟ್
ಅಧಿವೇಶನಕ್ಕೆ ಶೈಕ್ಷಣಿಕ ಪ್ರವಾಸವನ್ನು
ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ರಾಜ್ಯ ಶಾಸ್ತ್ರ ವಿಭಾಗದ
ವಿದ್ಯಾರ್ಥಿಗಳು, ವಿಭಾಗ ಮುಖ್ಯಸ್ಥೆ ಅನಿತಾ ಕಾಮತ್ ಹಾಗೂ ಉಪನ್ಯಾಸಕಿ
ಕವಿತಾ ಉಪಸ್ಥಿತರಿದ್ದರು.
