
ಪುತ್ತೂರು, ಡಿ.12: ಸ್ವಾಮಿ ವಿವೇಕಾನಂದರು ಎಂದರೆ ಸ್ಫೂರ್ತಿ. ಅವರು ಕೇವಲ ಯುವಕರಿಗೆ ಮಾತ್ರ ಸ್ಫೂರ್ತಿಯಲ್ಲದೆ, ಪ್ರತಿಯೊಬ್ಬರಿಗೂ ಆದರ್ಶ ವ್ಯಕ್ತಿ.
ಇತ್ತೀಚಿನ ಸಮಾಜದಲ್ಲಿ ನಾವು ವಿದ್ಯೆಯನ್ನು ಕಾಣುತ್ತೇವೆ ಆದರೆ
ವಿನಯವನ್ನಲ್ಲ. ವಿದ್ಯೆಯ ಜೊತೆಗೆ ವಿನಯವಿದ್ದಾಗ ಮಾತ್ರ ಸಮಾಜ
ಉಳಿಯಲು ಸಾಧ್ಯ. ನಮ್ಮ ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ
ನಮ್ಮೆಲ್ಲರದ್ದು. ನಾವು ಮಾಡುವ ಕೆಲಸಗಳಲ್ಲಿ ಶ್ರದ್ಧೆ ಮತ್ತು
ಭಕ್ತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಹೊಸ
ಹೊಸ ಯೋಚನೆಗಳನ್ನು ಚಿಂತಿಸುವುದರ ಬದಲಾಗಿ ಚಿಂತನೆಯನ್ನು
ಮಾಡಬೇಕು. ನಮ್ಮ ಚಿಂತನೆ ನಮ್ಮ ವ್ಯಕ್ತಿತ್ವದ ಕುರಿತು ತಿಳಿಸುತ್ತದೆ.
ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಆದರ್ಶಗಳನ್ನು
ಅಳವಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ಮಠ ಮಂಗಳೂರು ಇಲ್ಲಿನ
ಸ್ವಯಂಸೇವಕಿ ಕೆ. ನಿವೇದಿತಾ ಎಮ್. ಕಾಮತ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ
(ಸ್ವಾಯತ್ತ) ಪುತ್ತೂರು, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ
ಕೇಂದ್ರ, ವಿವೇಕಾನಂದ ಸಂಶೋಧನಾ ಕೇಂದ್ರ, ಐಕ್ಯೂಎಸಿ ಹಾಗೂ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇದರ ಸಹಯೋಗದಲ್ಲಿ
ನಡೆದ ವಿವೇಕ ಸ್ಮೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ
ಮಾತನಾಡಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಪುತ್ತೂರು ಇಲ್ಲಿನ
ಆಡಳಿತ ಮಂಡಳಿಯ ಅಧ್ಯಕ್ಷ ರಮೇಶ್ ಚಂದ್ರ ಎಂ. ಅಧ್ಯಕ್ಷೀಯ
ನುಡಿಗಳನ್ನಾಡುತ್ತಾ, ನಾವು ನಮ್ಮಲ್ಲಿರುವ ಚಿಂತನೆಗಳನ್ನು ಸರಿಯಾದ
ರೀತಿಯಲ್ಲಿ ಅಳವಡಿಸಿಕೊಂಡಾಗ ಜೀವನದಲ್ಲಿ ಗೆಲುವನ್ನು ಸಾಧಿಸಲು ಸಾಧ್ಯ
ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಕಾಲೇಜಿನ ಭಾರತೀಯ ಸಂಸ್ಕೃತಿಮತ್ತು
ಲಲಿತ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕಿ ಡಾ. ವಿದ್ಯಾ ಎಸ್ ಹಾಗೂ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿನ
ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿವೇಕಾನಂದ ಸಂಶೋಧನ ಕೇಂದ್ರದ
ನಿರ್ದೇಶಕಿ ಹಾಗೂ ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರದ
ಮುಖ್ಯಸ್ಥೆ ಡಾ. ವಿಜಯ ಸರಸ್ವತಿ ಸ್ವಾಗತಿಸಿ, ಪ್ರಸ್ತಾವಿಕ ನುಡಿಗಳನ್ನಾಡಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಧ್ಯಾಪಕಿ ಉಮಾ ವಂದಿಸಿ,
ವಿವೇಕಾನoದ ಸ್ನಾತಕೋತ್ತರ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಅನನ್ಯ
ಎಸ್ ನಿರೂಪಿಸಿದರು.
