
ಪುತ್ತೂರು: ಹೆಣ್ಣು ಮಕ್ಕಳು ವೃತ್ತಿ ನಡೆಸುವ ಸ್ಥಳದಲ್ಲಿ
ನಡೆಯುವ ಲೈಂಗಿಕ ಕಿರುಕುಳವನ್ನು ತಡೆಗಟ್ಟಲು
ಕುಂದುಕೊರತೆಗಳ ನಿವಾರಣಾ ಕೋಶ ಹಾಗೂ ಲೈಂಗಿಕ
ಕಿರುಕುಳ ನಿಯಂತ್ರಣ ಸಮಿತಿಯನ್ನು ೨೦೧೩ ರಂದು
ಜಾರಿಗೊಳಿಸಲಾಯಿತು. ಈ ಸಮಿತಿಯು ಹೆಣ್ಣು ಮಕ್ಕಳ
ವೈಯಕ್ತಿಕ ಸಮಸ್ಯೆಯನ್ನು ಬಗೆಹರಿಸುವುದಲ್ಲದೆ
ಶೈಕ್ಷಣಿಕ ಸಮಸ್ಯೆ, ಪಠ್ಯಕ್ರಮಗಳ ಕುರಿತಾದ
ಗೊಂದಲಗಳ ಪರಿಹಾರ, ಆರೋಗ್ಯ ಕುರಿತಾದ ಸಮಸ್ಯೆಗಳಿಗೆ
ಪರಿಹಾರವನ್ನು ನೀಡುವ ಕಾರ್ಯವನ್ನು ಈ ಸಮಿತಿಗಳು
ನಿರಂತರವಾಗಿ ಮಾಡಿಕೊಂಡು ಬಂದಿವೆ.ಈ ಸಮಿತಿಯು ಹೆಣ್ಣುಮಕ್ಕಳ
ರಕ್ಷಣೆಗಾಗಿಯೇ ಜಾರಿಗೊಳಿಸಿರುವುದರಿಂದ ಪ್ರತಿಯೊಂದು
ಸAಸ್ಥೆಗಳಲ್ಲಿಯೂ ಇದು ಅತ್ಯಂತ ಸಕ್ರಿಯವಾದ ಸಮಿತಿಯಾಗಿ
ಕಾರ್ಯನಿರ್ವಹಿಸಬೇಕು ಎಂದು ಪುತ್ತೂರಿನ ವಿವೇಕಾನಂದ
ಕಾನೂನು ಕಾಲೇಜಿನ ಸಹಾಯಕ ಉಪನ್ಯಾಸಕಿ ಸುಭಾಷಿನಿ. ಜೆ
ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು
ವಾಣಿಜ್ಯ ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ
ಕುಂದುಕೊರತೆಗಳ ನಿವಾರಣಾ ಕೋಶ, ಲೈಂಗಿಕ
ಕಿರುಕುಳ ನಿಯಂತ್ರಣ ಸಮಿತಿ, ಮಹಿಳಾ ಸಮಿತಿ ಮತ್ತು ಐಕ್ಯೂಎಸಿ
ಜಂಟಿಯಾಗಿ ಆಯೋಜಿಸಿದ ವಿದ್ಯಾರ್ಥಿಗಳ ಕುಂದುಕೊರತೆ ಪರಿಹಾರ
ಮತ್ತು ಬೆಂಬಲ ವ್ಯವಸ್ಥೆಯನ್ನು ಸಶಕ್ತಗೊಳಿಸುವ ಜಾಗೃತಿ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ
ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ
ಪ್ರಾಂಶುಪಾಲ ಡಾ. ಶ್ರೀಧರ್ ನಾಯ್ಕ್ ಭಾರತದಲ್ಲಿರುವ ಹೆಣ್ಣು
ಮಕ್ಕಳು ಎಂದಿಗೂ ಗುಲಾಮರಲ್ಲ ಅವರು ತಮ್ಮದೇ ಆದ
ಅಸ್ತಿತ್ವವನ್ನು ಹೊಂದಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ
ಶೋಷಣೆಗಳ ಬಗ್ಗೆ ಧ್ವನಿ ಎತ್ತುವ ಧೈರ್ಯವನ್ನು
ಶಿಕ್ಷಣದಿಂದ ಪಡೆದಿದ್ದಾರೆ. ಹೆಣ್ಣು ಮಕ್ಕಳು ಕಿಡಿಗೇಡಿಗಳಿಂದ
ತಮ್ಮನ್ನು ತಾವು ರಕ್ಷಿಸಿಕೊಳ್ಳುವಷ್ಟು
ಚಾಕಚಕ್ಯತೆಯನ್ನು ಹೊಂದಿರಬೇಕು ಎಂದರು.
ವೇದಿಕೆಯಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ರವಿಕಲಾ, ಮಹಿಳಾ
ಘಟಕದ ಸಂಯೋಜಕಿ ಹಾಗೂ ವಿದ್ಯುನ್ಮಾನ ವಿಭಾಗದ ಮುಖ್ಯಸ್ಥೆ
ಸುಪ್ರಭಾ. ಎ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕುಂದುಕೊರತೆಗಳ ನಿವಾರಣಾ
ಕೋಶದ ಸಂಯೋಜಕಿ ಹಾಗೂ ರಾಜ್ಯಶಾಸ್ತ್ರ ವಿಭಾಗದ
ಮುಖ್ಯಸ್ಥೆ ಅನಿತಾ ಕಾಮತ್. ಕೆ ಸ್ವಾಗತಿಸಿ, ಲೈಂಗಿಕ ಕಿರುಕುಳ
ನಿಯಂತ್ರಣ ಸಮಿತಿಯ ಸಂಯೋಜಕಿ ಹಾಗೂ ಕನ್ನಡ ವಿಭಾಗದ
ಉಪನ್ಯಾಸಕಿ ಡಾ.ಗೀತಾಕುಮಾರಿ. ಟಿ ವಂದಿಸಿ, ಗಣಿತ ವಿಭಾಗದ
ಮುಖ್ಯಸ್ಥೆ ಸೌಮ್ಯ. ಬಿ ನಿರ್ವಹಿಸಿದರು.
