News & Updates

ವಿವೇಕಾನಂದ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿಗಳ ಕಣ್ಣೀರ ಛಾಯೆ ಕಿರುಚಿತ್ರ ಬಿಡುಗಡೆ.

Oplus_0

ಪುತ್ತೂರು : ಒಂದು ಸಿನಿಮಾ ಮೆಚ್ಚುಗೆ ಗಳಿಸಬೇಕಾದರೆ
ಅದರ ಹಿಂದೆ ಹಲವರ ಶ್ರಮವಿರುತ್ತದೆ. ವಿದ್ಯಾರ್ಥಿ ಜೀವನದಲ್ಲೇ
ನಮ್ಮ ಗುರಿಯನ್ನು ನಿರ್ಧರಿಸಿಕೊಳ್ಳಬೇಕು.
ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನ ಅಗತ್ಯ.
ಜವಾಬ್ದಾರಿ ಇದೆ ಎಂದು ಕನಸನ್ನು ದೂರ ಮಾಡಿಕೊಳ್ಳಬಾರದು
ಎಂದು ಕಾಲೇಜಿನ ಹಿರಿಯ ವಿದ್ಯಾರ್ಥಿ, ಯೂಟ್ಯೂಬರ್ ಅಚಲ್ ಉಬರಡ್ಕ
ನುಡಿದರು.
ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ (
ಸ್ವಾಯತ್ತ) ಇದರ ಪತ್ರಿಕೋದ್ಯಮ ವಿಭಾಗ, ನಯನ
ಫೋಟೋಗ್ರಫಿ ಕ್ಲಬ್ ಹಾಗೂ ಐಕ್ಯೂ ಎಸಿ
ಸಹಯೋಗದೊಂದಿಗೆ ನಡೆದ ಕಣ್ಣೀರ ಛಾಯೆಕಿರು ಚಿತ್ರ
ಬಿಡುಗಡೆಗೊಳಿಸಿ ಇವರು ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ
ಪರೀಕ್ಷಾಂಗ ಕುಲ ಸಚಿವ ಡಾ. ಶ್ರೀಧರ್ ಎಚ್. ಈ, ಕನ್ನಡದಲ್ಲಿ ಕಿರು
ಚಿತ್ರಕ್ಕೆ ದೊಡ್ಡ ಪರಂಪರೆ ಇದೆ. ಕೆಲವೇ ನಿಮಿಷಗಳಲ್ಲಿ
ಕಥೆಯೊಂದನ್ನು ಕಟ್ಟಿಕೊಡುವ ಕಿರು ಚಿತ್ರಗಳು ಅದ್ಭುತ
ಅನುಭವವನ್ನು ನೀಡುತ್ತದೆ. ಇವುಗಳು ಒಳ್ಳೆಯ
ಸಂದೇಶವನ್ನು ನೀಡುತ್ತದೆ ಎಂದರು. ಕಾಲೇಜಿನ ಆಡಳಿತ
ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಹಾಗೂ
ಪ್ರಾಂಶುಪಾಲ ಡಾ. ಶ್ರೀಧರ್ ನಾಯಕ್.ಬಿ. ಶುಭ ಹಾರೈಸಿದರು.
ತೃತೀಯ ಪತ್ರಿಕೋದ್ಯಮ ವಿದ್ಯಾರ್ಥಿಗಳ ಪ್ರಾಯೋಗಿಕ
ಪತ್ರಿಕೆ ವಿಕಸನ ವನ್ನು ಬಿಡುಗಡೆಗೊಳಿಸಲಾಯಿತು.
ವೇದಿಕೆಯಲ್ಲಿಕಣ್ಣೀರ ಛಾಯೆ ಕಿರುಚಿತ್ರದ ನಿರ್ಮಾಪಕ
ಹಾಗು ನಿರ್ದೇಶಕ ಅಶ್ವಿನ್ ಸಾಜಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥೆ
ಭವ್ಯ ಪಿ.ಆರ್ ನಿಡ್ಪಳ್ಳಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ದ್ವಿತೀಯ ಪತ್ರಿಕೋದ್ಯಮ ವಿದ್ಯಾರ್ಥಿನಿ ಭೂಮಿಕಾ ವಂದಿಸಿದರು.
ಚೈತನ್ಯ ನಿರೂಪಿಸಿದರು. ಉಪನ್ಯಾಸಕಿ ಹವ್ಯಾ ಪುರ ಹಾಗೂ ಸುತನ್
ಕೇವಳ ಸಹಕರಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’ ಜಾಗೃತಿ ಅಭಿಯಾನ;

ವಿವೇಕಾನಂದ ಕಾಲೇಜಿನಲ್ಲಿ ‘ನಶಾ ಮುಕ್ತ ಭಾರತ’…

ಪುತ್ತೂರು, ನ. 24; ನಶೆ ಮತ್ತು ಮದ್ಯವ್ಯಸನ…

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ. ರಾಜೇಶ್ವರಿ ಎಂ:ಇoಟರ್ನೆಟ್ ಆಫ್ ಥಿಂಗ್ಸ್ (ಐಓಟಿ) ಹ್ಯಾಂಡ್ಸ್-ಆನ್ ಕಾರ್ಯಾಗಾರ ಉದ್ಘಾಟನೆ;

ತಂತ್ರಜ್ಞಾನ ಮಾನವ ಜೀವನದ ಅವಿಭಾಜ್ಯಅಂಗ: ಡಾ.…

ಪುತ್ತೂರು ನ.24: ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ಆಫ್…

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪರಿಸರ ರಕ್ಷಣಾದಿನಾಚರಣೆ ಹಾಗೂ…

ಪುತ್ತೂರು. ನ. 22: ಮನುಷ್ಯ ಯಾವಾಗ ನೈತಿಕ…