VIVEKANANDA COLLEGE of Arts, Science and Commerce (Autonomous) Puttur

Re - accredited at 'A' Grade by the NAAC with 3.30 CGPA

Recognised as the College with Potential for Excellence (CPE) by the UGC

| +91 8251 230 455 | Kannada

ದೇಶದ ಅಭಿವೃಧ್ಧಿಗೆ ಸಂಶೋಧನೆ ಅತೀ ಮುಖ್ಯ: ಶ್ರೀನಿವಾಸ್ ಪೈ.

ಪುತ್ತೂರು: ಸಂಶೋಧನಾ ಮನೋಭಾವ ವಿದ್ಯಾರ್ಥಿಗಳಲ್ಲಿ ಬೆಳೆಯಬೇಕು. ಸ್ಪರ್ದಾತ್ಮಕ ಯುಗದಲ್ಲಿ ದೇಶದ ಅಭಿವೃಧ್ಧಿಗೆ ಸಂಶೋಧನೆ ಅತೀ ಅಗತ್ಯವಾಗಿದೆ. ಪ್ರತಿಯೊಂದು ವಿಷಯಗಳ ಮೇಲೆಯೂ ಸಂಶೋಧನೆ ಮಾಡಲು ಸಾಧ್ಯವಿದೆ. ಸಂಶೋಧನೆಯಿಂದಲಾಗಿ ದೇಶದ ಕೀರ್ತಿಯನ್ನು ಎತ್ತರಿಸುವುದರೊಡನೆ ಸ್ವಯಂ ಬೆಳವಣಿಗೆಯನ್ನು ಸಾಧಿಸಲು ಸಾಧ್ಯ ಎಂದು ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ್ ಪೈ ಹೇಳಿದರು.

News Photo - Srinivas Pai
ಅವರು ಕಾಲೇಜಿನ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಲಾದ ’ಶೋಧನಾ’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.
ಈ ಸಂದರ್ಭ ರಸಾಯನ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಕೃಷ್ಣ ಕಾರಂತ ಮಾತನಾಡಿ ಸ್ಪರ್ಧೆಯಿಂದ ಸೋಲು ಗೆಲುವು ಮುಖ್ಯವಾಗುವುದಿಲ್ಲ. ಭಾಗವಹಿಸುವಿಕೆ ಮುಖ್ಯವಾದುದಾಗಿದ್ದು ಸಿಕ್ಕಿರುವ ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಅದರೊಂದಿಗೆ ನಮ್ಮಲ್ಲಿನ ಸಂಸ್ಕೃತಿಯನ್ನು ವಿನಿಮಯ ಮಾಡಿಕೊಳ್ಳುವುದು ಅತೀ ಮುಖ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ವಿಲ್ಸನ್ ಪ್ರಭಾಕರ್ ಮಾತನಾಡಿ, ಸ್ಫರ್ಧೆಯಿಂದ ಕೌಶಲ ವೃದ್ಧಿಯಾಗಲು ಸಾಧ್ಯವಿದೆ. ಕಾರ್ಯಕ್ರಮದ ಹೆಸರೇ ಸೂಚಿಸುವಂತೆ ಇದು ಶೋಧನೆಗೆ ಸಂಬಂಧಿಸಿದ್ದು ಎಂಬುದು. ಜ್ಞಾನದ ವಿಕಾಸಕ್ಕೆ ಸಂಶೋಧನೆ ಅಗತ್ಯ, ಸಂಶೋಧನೆಯ ವಿಷಯದ ಮೂಲಕ್ಕೆ ಇಳಿಯುವಷ್ಟು ಜ್ಞಾನದ ಮಟ್ಟವು ವೃದ್ಧಿಯಾಗುತ್ತದೆ. ಎಂದರು.
ಈ ಸಂದರ್ಭ ವೇದಿಕೆಯಲ್ಲಿ ಸ್ನಾತಕೋತ್ತರ ರಸಾಯನ ಶಾಸ್ತ್ರ ವಿಭಾಗದ ಸಂಯೋಜಕಿ ಸವಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಯೋಜಕಿ ವರ್ಷಾ ಶರ್ಮ ಸ್ವಾಗತಿಸಿ, ವಿದ್ಯಾರ್ಥಿನಿ ಜೋತ್ಸ್ನಾ ಜೊಲೀನ್ ಪಿಂಟೋ ವಂದಿಸಿದರು. ಕಾವ್ಯಶ್ರಿ ಪ್ರಾರ್ಥಿಸಿ, ಅನ್ನಪೂರ್ಣಾ ನಿರೂಪಿಸಿದರು.