ವಿವೇಕಾನಂದ ವಾಣಿಜ್ಯ ವಿಭಾಗದ ಇಬ್ಬರು ಸಿ.ಪಿ.ಟಿ ಪರೀಕ್ಷೆಯಲ್ಲಿ ತೇರ್ಗಡೆ
ಪುತ್ತೂರು: ಇಲ್ಲಿನ ವಿವೇಕಾನಂದ ಕಾಲೇಜಿನ ವಾಣಿಜ್ಯ ವಿಭಾಗದ ಇಬ್ಬರು ವಿದ್ಯಾರ್ಥಿಗಳು ಸಿ.ಎ ಹುದ್ದೆಯ ಆರಂಭಿಕ ಹಂತವಾದ ಸಿ.ಪಿ.ಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುತ್ತಾರೆ. ದ್ವಿತೀಯ ಬಿ.ಕಾಂ ಎ ವಿಭಾಗದ ಕಾರ್ತಿಕ್ ಹಾಗೂ ದ್ವಿತೀಯ ಬಿ.ಕಾಂ ಡಿ ವಿಭಾಗದ ಸನಿತ್ ಗೌಡ ತೇರ್ಗಡೆಯಾದ ವಿದ್ಯಾರ್ಥಿಗಳು. ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟ್ಸ್ ಆಫ್ ಇಂಡಿಯಾ ಕಳೆದ ಡಿಸೆಂಬರ್ನಲ್ಲಿ ಸಿ.ಪಿ.ಟಿ ಪರೀಕ್ಷೆಯನ್ನು ಆಯೋಜಿಸಿತ್ತು. ಈ ಇಬ್ಬರೂ ವಿದ್ಯಾರ್ಥಿಗಳು ವಿವೇಕಾನಂದ ಪದವಿ ಕಾಲೇಜಿನ ವಾಣಿಜ್ಯ ಮತ್ತು ವ್ಯವಃಆರ ನಿರ್ವಹಣಾ ವಿಭಾಗದ ಆಶ್ರಯದಲ್ಲಿ ಮಂಗಳೂರಿನ ಕಿರಣ್ ವಸಂತ್ ಅಸೋಸಿಯೇಟ್ಸ್ ನಡೆಸುತ್ತಿರುವ ಸಿ.ಪಿ.ಟಿ ತರಬೇತಿ ತರಗತಿಗೆ ಹಾಜರಾಗಿದ್ದರು.