ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ)ದ ಎನ್ಸಿಸಿ ವಿದ್ಯಾರ್ಥಿಗಳು ಉತ್ತರಾಖಂಡ
ರಾಜ್ಯದ ರಾಣಿಭಾಗ್ನಲ್ಲಿ ನಡೆದ ರಾಷ್ಟ್ರ ಮಟ್ಟದ &quoಣ;ಏಕ್ ಭಾರತ್
ಶ್ರೇಷ್ಠ್ ಭಾರತ್ &quoಣ; ಶಿಬಿರದಲ್ಲಿ ಇತ್ತೀಚಿಗೆ ಭಾಗವಹಿಸಿದ್ದು ವಿವಿಧ
ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ
ಪದಕಗಳನ್ನು ಗಳಿಸಿದ್ದಾರೆ.
ಕಾಲೇಜಿನ ಎನ್ಸಿಸಿ ಕೆಡೆಟ್ಗಳಾದ
ಸಿಎಸ್ಎಂ ಬಬಿನ್ ಬಿ. ರೈ , ಸಿಕ್ಯುಎಂಎಸ್ ಮನ್ಮಶ್ರೀ ಎಮ್.ಐ, ಎಸ್ಜಿಟಿ ಆಕರ್ಶ್ ಜಿ.
ಶೆಟ್ಟಿ, ಎಸ್ಜಿಟಿ ಅಮೃತ, ಎಸ್ಜಿಟಿ ಧೀರಜ್ ಎಸ್.ವಿ, ಎಲ್ಸಿಪಿಎಲ್ ಭವಿಷ್ಯಾ ಜೆ.ಕೆ,
ಎಲ್ಸಿಪಿಎಲ್ ಕೃಷ್ಣ ವಿನ್ಯಾಸ್ ಪಾಲ್ಗೊಂಡಿದ್ದರು. ಇವರಿಗೆ ಕಾಲೇಜಿನ ಎನ್ಸಿಸಿ
ಅಧಿಕಾರಿ ಲೆ. ಭಾಮಿ ಅತುಲ್ ಶೆಣೈ ಮಾರ್ಗದರ್ಶನ ನೀಡಿರುತ್ತಾರೆ.
ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಮತ್ತು ಎನ್ಸಿಸಿ ಘಟಕ,
ಐಕ್ಯೂಎಸಿ ಘಟಕ, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ
ಹಾಗೂ ವಿದ್ಯಾರ್ಥಿ ವೃಂದ ಸಾಧನೆಗೈದಿರುವ ವಿದ್ಯಾರ್ಥಿಗಳಿಗೆ
ಶುಭಹಾರೈಸಿದ್ದಾರೆ.