News & Updates

ವಿವೇಕಾನಂದ ಕಾಲೇಜಿನ ಎನ್ ಸಿ ಸಿಯ ಮೂವರುವಿದ್ಯಾರ್ಥಿಗಳು ಅಗ್ನಿಪಥ್ ಗೆ ಆಯ್ಕೆ.

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ
ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ವಾಣಿಜ್ಯ
ವಿಭಾಗದ ವಿದ್ಯಾರ್ಥಿಗಳಾದ ಪುನೀತ್ ರಾಜ್ (ಕೊಂಬಾರು ನಿವಾಸಿ ದಿ.ಅಪ್ಪಣ್ಣ
ಹಾಗೂ ದಿ.ಗಿರಿಜಾ ಇವರ ಪುತ್ರ), ಅವಿನ್ ಎಂ (ಮಡ್ನೂರು ನಿವಾಸಿ ಎ ಎಚ್ .
ಚಂದ್ರಶೇಖರ ಹಾಗೂ ಗೀತಾ ದಂಪತಿಯ ಪುತ್ರ) ಮತ್ತು ಕೆ.ಎಸ್
ಕಿರಣ್ ಕುಮಾರ್ (ಮುಂಡೂರು ನಿವಾಸಿ ಕೆ.ಸುಬ್ರಾಯ ಹಾಗೂ
ಮೀನಾಕ್ಷಿ ಪಿ ಇವರ ಪುತ್ರ) ಇವರು ಭಾರತ ಸರಕಾರದ ಅಗ್ನಿಪಥ್
ಯೋಜನೆಯಡಿಯಲ್ಲಿ ಮೂರು ಹಂತದ ಪರೀಕ್ಷೆಯಲ್ಲಿ
ಉತ್ತೀರ್ಣಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಈ ಮೂವರೂ ವಿದ್ಯಾರ್ಥಿಗಳು ಅತ್ಯುತ್ತಮ
ಕ್ರೀಡಾಪಟುಗಳಾಗಿದ್ದು ಇದೀಗ ಮೂವರೂ ಬೇರೆ ಬೇರೆ
ಸ್ಥಳಗಳಾದ ಲಕ್ನೋ , ಮಧ್ಯಪ್ರದೇಶ ಹಾಗೂ ನಾಸಿಕ್ ನಲ್ಲಿ
ತಮ್ಮ ತರಬೇತಿಯನ್ನು ಪಡೆಯಲು ತೆರಳಿದ್ದಾರೆ. ಇವರಿಗೆ ಎನ್‍ಸಿಸಿ
ಘಟಕದ ಮುಖ್ಯಸ್ಥ ಲೆ.ಭಾಮಿ ಅತುಲ್ ಶೆಣೈ ಮಾರ್ಗದರ್ಶನ
ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ
ಮಂಡಳಿ, ಪ್ರಾಂಶುಪಾಲರು, ಎನ್‍ಸಿಸಿ ಘಟಕ, ಐಕ್ಯೂಎಸಿ ಘಟಕ,
ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ
ವೃಂದ ಶುಭಾಶಯಗಳನ್ನು ಕೋರಿದ್ದಾರೆ.

Related News

ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ ೨೦೨೪ ಉದ್ಘಾಟನೆ.

ವಿವೇಕಾನಂದ ಕಾಲೇಜಿನಲ್ಲಿ ಫುಡ್ ಕಾರ್ನಿವಲ್ ೨೦೨೪…

ಪುತ್ತೂರು: ಕಾಲೇಜು ದಿನಗಳಲ್ಲೇ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೆಳೆಸುವುದು…

ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ ಎನ್‌ಸಿಸಿ ವಿದ್ಯಾರ್ಥಿಗಳ ಸಾಧನೆ.

ರಾಷ್ಟ್ರ ಮಟ್ಟದ ಶಿಬಿರದಲ್ಲಿ ವಿವೇಕಾನಂದ ಕಾಲೇಜಿನ…

ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು…

ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯವನ್ನುಸೂಚಿಸುತ್ತದೆ : ಪಾಂಡೀರ ಕೌಶಿಕ್ ಕಾವೇರಪ್ಪ.

ಆರ್ಕಿಡ್ ಸಸ್ಯಗಳು ಪರಿಸರದ ಆರೋಗ್ಯವನ್ನುಸೂಚಿಸುತ್ತದೆ :…

ಪುತ್ತೂರು: ಭಾರತದಲ್ಲಿ ಆರ್ಕಿಡ್ ಗಳು ವಿಶಿಷ್ಟ ಸ್ಥಾನವನ್ನುಹೊಂದಿದೆ.…