ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಾಣಿಜ್ಯ ಹಾಗೂ ವಿಜ್ಞಾನ
ಮಹಾವಿದ್ಯಾಲಯ (ಸ್ವಾಯತ್ತ)ದ ಎನ್.ಸಿ.ಸಿ ಘಟಕದ ತೃತೀಯ ವಾಣಿಜ್ಯ
ವಿಭಾಗದ ವಿದ್ಯಾರ್ಥಿಗಳಾದ ಪುನೀತ್ ರಾಜ್ (ಕೊಂಬಾರು ನಿವಾಸಿ ದಿ.ಅಪ್ಪಣ್ಣ
ಹಾಗೂ ದಿ.ಗಿರಿಜಾ ಇವರ ಪುತ್ರ), ಅವಿನ್ ಎಂ (ಮಡ್ನೂರು ನಿವಾಸಿ ಎ ಎಚ್ .
ಚಂದ್ರಶೇಖರ ಹಾಗೂ ಗೀತಾ ದಂಪತಿಯ ಪುತ್ರ) ಮತ್ತು ಕೆ.ಎಸ್
ಕಿರಣ್ ಕುಮಾರ್ (ಮುಂಡೂರು ನಿವಾಸಿ ಕೆ.ಸುಬ್ರಾಯ ಹಾಗೂ
ಮೀನಾಕ್ಷಿ ಪಿ ಇವರ ಪುತ್ರ) ಇವರು ಭಾರತ ಸರಕಾರದ ಅಗ್ನಿಪಥ್
ಯೋಜನೆಯಡಿಯಲ್ಲಿ ಮೂರು ಹಂತದ ಪರೀಕ್ಷೆಯಲ್ಲಿ
ಉತ್ತೀರ್ಣಗೊಂಡು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಈ ಮೂವರೂ ವಿದ್ಯಾರ್ಥಿಗಳು ಅತ್ಯುತ್ತಮ
ಕ್ರೀಡಾಪಟುಗಳಾಗಿದ್ದು ಇದೀಗ ಮೂವರೂ ಬೇರೆ ಬೇರೆ
ಸ್ಥಳಗಳಾದ ಲಕ್ನೋ , ಮಧ್ಯಪ್ರದೇಶ ಹಾಗೂ ನಾಸಿಕ್ ನಲ್ಲಿ
ತಮ್ಮ ತರಬೇತಿಯನ್ನು ಪಡೆಯಲು ತೆರಳಿದ್ದಾರೆ. ಇವರಿಗೆ ಎನ್ಸಿಸಿ
ಘಟಕದ ಮುಖ್ಯಸ್ಥ ಲೆ.ಭಾಮಿ ಅತುಲ್ ಶೆಣೈ ಮಾರ್ಗದರ್ಶನ
ನೀಡಿರುತ್ತಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ
ಮಂಡಳಿ, ಪ್ರಾಂಶುಪಾಲರು, ಎನ್ಸಿಸಿ ಘಟಕ, ಐಕ್ಯೂಎಸಿ ಘಟಕ,
ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದ ಹಾಗೂ ವಿದ್ಯಾರ್ಥಿ
ವೃಂದ ಶುಭಾಶಯಗಳನ್ನು ಕೋರಿದ್ದಾರೆ.