News & Updates

ಕೈಝೆನ್ ಪರಿಕಲ್ಪನೆಯಿಂದ ಆತ್ಮವಿಶ್ವಾಸ ವೃದ್ಧಿ- ರಂಜನ್ ಬೆಳ್ಳಾರ್ಪಾಡಿ;

ಪುತ್ತೂರು: ಭಾರತ ದೇಶ ಮುಂದುವರಿದ ದೇಶವಾದರೂ
ಸ್ವಚ್ಛತೆಯ ವಿಚಾರವಾಗಿ ಯೋಚಿಸುವಂತಾಗಿದೆ.
ಸ್ವಚ್ಛತೆಯನ್ನು ಪಾಲಿಸುವ ಕೆಲಸ ಅಗತ್ಯವಾಗಿ ಆಗಬೇಕು.
ಯುವ ಜನತೆಗೆ ಅವಕಾಶಗಳೂ ಹೆಚ್ಚಿದ್ದು ಸ್ವಚ್ಛತೆಯ
ವಿಷಯದಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಬಹುದು
ಎಂದು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ
ಸಂಯೋಜಕ ರಂಜನ್ ಬೆಳ್ಳಾರ್ಪಾಡಿ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ(ಸ್ವಾಯತ್ತ) ಇಲ್ಲಿ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ
ಸಹಕಾರ ಸಂಘ ನಿ. ಪುತ್ತೂರು ಹಾಗೂ ಸರಸ್ವತಿ ಚಾರಿಟೇಬಲ್
ಟ್ರಸ್ಟ್ ಇದರ ಸಹಭಾಗಿತ್ವದೊಂದಿಗೆ ನಡೆದ ಸತ್ಯೇಶ ಕೆದಿಲಾಯ
ಸಂಕಲಿತ ‘ಸ್ವಚ್ಛತೆಯ ಪಂಚಸೂತ್ರಗಳು ಹಾಗೂ
ಕೈಝೆನ್’ ಕೃತಿ ಬಿಡುಗಡೆ ಹಾಗೂ ಉಪನ್ಯಾಸ
ಕಾರ್ಯಕ್ರಮದಲ್ಲಿ ಕೃತಿಯನ್ನು ಲೋಕಾರ್ಪಣೆಗೊಳಿಸಿ
ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ
ಕೆ.ಎನ್ ಮಾತನಾಡಿ ಸ್ವಚ್ಛತೆ ಎಂಬುದು ನಮ್ಮ ಮನಸು,
ಭಾವನೆಗಳು ಹಾಗೂ ನೋಡುವ ದೃಷ್ಠಿಕೋನಗಳಿಗೂ
ಸಂಬAಧಿಸಿದ್ದಾಗಿರುತ್ತದೆ. ಯುವ ಸಮೂಹ ಸಮಾಜಮುಖಿಯಾಗಿ
ಕೆಲಸ ನಿರ್ವಹಿಸಲು ಪುಸ್ತಕಗಳು ಮಾರ್ಗದರ್ಶಿಯಾಗಬಲ್ಲದು
ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪುತ್ತೂರು ಶ್ರೀ ಸರಸ್ವತಿ
ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ನಿರ್ದೇಶಕ ಹಾಗೂ ಶ್ರೀ
ಸರಸ್ವತಿ ಚಾರಿಟೇಬಲ್ ಟ್ರಸ್ಟಿನ ಟ್ರಸ್ಟೀ ದೇವೀಪ್ರಸಾದ್.ಕೆ ಗುರಿ
ತಲುಪಲು ಶಿಸ್ತು ಪಾಲನೆ ಹಾಗೂ ಆತ್ಮವಿಶ್ವಾಸ ಇರಬೇಕಾಗುತ್ತದೆ.
ಸ್ವಚ್ಛತೆ ನಮ್ಮ ದೈನಂದಿನ ಅಭ್ಯಾಸವಾಗಬೇಕು ಎಂದು
ತಿಳಿಸಿದರು.
ಈ ಸಂದರ್ಭದಲ್ಲಿ ಸತ್ಯೇಶ ಕೆದಿಲಾಯ ಹಾಗೂ ರಂಜನ್ ಬೆಳ್ಳಾರ್ಪಾಡಿ
ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ
ಪ್ರಾಂಶುಪಾಲ ಡಾ. ಶ್ರೀಧರ ನಾಯಕ್.ಬಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಕಾಲೇಜಿನ ಉಪಪ್ರಾಂಶುಪಾಲ ಶ್ರೀಕೃಷ್ಣ
ಗಣರಾಜ ಭಟ್ ಸ್ವಾಗತಿಸಿ, ಸರಸ್ವತಿ ಚಾರಿಟೇಬಲ್ ಟ್ರಸ್ಟಿನ ಸಂಯೋಜಕ
ಬಿಪಿನ್ ಚಂದ್ರ ವಂದಿಸಿದರು. ದ್ವಿತೀಯ ಕಲಾ ವಿಭಾಗದ ವಿದ್ಯಾರ್ಥಿನಿ
ಚೈತನ್ಯ ನಿರ್ವಹಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ ಮತ್ತು ಕೌಶಲ್ಯಾಭಿವೃದ್ಧಿಗೆ ಪ್ರೇರಣೆ” – ಡಾ. ವಿಜಯ್ ವಿ. ಎಸ್;

ವಿವೇಕಾನಂದ ಕಾಲೇಜಿನಲ್ಲಿ ಹ್ಯಾಕಥಾನ್ ಕಾರ್ಯಗಾರ“ಹ್ಯಾಕಥಾನ್ ಸೃಜನಶೀಲತೆ…

ಪುತ್ತೂರು: “ಇಂದಿನ ಯುಗದಲ್ಲಿ ಶಿಕ್ಷಣ ಮಾತ್ರವಲ್ಲದೆನಮ್ಮಲ್ಲಿರುವ ಕೌಶಲ್ಯಗಳು…

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್ ಪಂದ್ಯಾಟದಲ್ಲಿವಿವೇಕಾನoದ ಕಾಲೇಜಿಗೆ ಪ್ರಶಸ್ತಿ;

ಮಂಗಳೂರು ವಿವಿ ಅಂತರ್ ಕಾಲೇಜು ಚೆಸ್…

ಪುತ್ತೂರು: ಇತ್ತೀಚೆಗೆ ಉಡುಪಿಯ ಉಪೇಂದ್ರ ಪೈಮೆಮೋರಿಯಲ್ ಕಾಲೇಜು…

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ವಿವೇಕಾನಂದ ಕಾಲೇಜಿನಲ್ಲಿ ಪ್ರಾಧ್ಯಾಪಕರ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ;

ಪುತ್ತೂರು, ಅ.೨೭: ಒಬ್ಬ ಉತ್ತಮ ಶಿಕ್ಷಕ ಸಂವಹನ…