News & Updates

ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ ಬರೆಯುವುದು ಬದುಕು;ಡಾ. ಶ್ರೀಶ ಕುಮಾರ;

ತೋರಿಸಿಕೊಟ್ಟವರು. ಏಕವಚನದ ಕಡೆಯಿಂದ ಬಹುವಚನದ ಕಡೆಗೆ ನಾವು
ಸಾಗಬೇಕಿದೆ. ಬುದ್ಧಿಯಿಂದ ಬರೆಯುವುದು ಪರೀಕ್ಷೆ, ಹೃದಯದಿಂದ
ಬರೆಯುವುದು ಬದುಕು. ಜಗತ್ತೇ ನನ್ನ ಮನೆ ಎಂದು ಬದುಕಿದಾಗ, ವಸುಧೈವ
ಕುಟುಂಬಕA ಎನ್ನುವುದು ಸಾಕಾರಗೊಳ್ಳುತ್ತದೆ ಎಂದು ಕಾಲೇಜಿನ ಸಂಸ್ಕೃತ
ವಿಭಾಗದ ಮುಖ್ಯಸ್ಥ ಡಾ. ಶ್ರೀಶ ಕುಮಾರ ಹೇಳಿದರು.
ಅವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)
ಪುತ್ತೂರು ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಕೇಂದ್ರ
ವಿವೇಕಾನAದ ಸಂಶೋಧನಾ ಕೇಂದ್ರ ಮತ್ತು ಐಕ್ಯೂಎಸಿ ಘಟಕದ
ಸಂಯೋಜನೆಯಲ್ಲಿ ಜಗತ್ತಿಗೆ ಭಾರತದ ಅಧ್ಯಾತ್ಮಿಕ ಚಿಂತನೆಯನ್ನು ಪರಿಚಯಿಸಿದ
ರಾಷ್ಟ್ರ ಸಂತ ಸ್ವಾಮಿ ವಿವೇಕಾನಂದರ ಕುರಿತಾದ ಚಿಂತನೆಗಳ ಉಪನ್ಯಾಸ
ಮಾಲಿಕೆಯಲ್ಲಿ ಮಾತನಾಡಿದರು.
ಕಾಲೇಜು ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ ವಿವೇಕ
ಸ್ಮೃತಿ ಕಾರ್ಯಕ್ರಮ ಇಲ್ಲಿಯವರೆಗೆ ನಡೆದುಕೊಂಡು ಬಂದಿದೆಯೆAದರೆ
ಅದರಿAದ ನಾವು ಪಡೆದುಕೊಳ್ಳಬೇಕಾದದ್ದು ಇನ್ನೂ ಇದೆ ಎಂದರ್ಥ. ಅದನ್ನು
ಅರ್ಥಮಾಡಿಕೊಂಡು ಮುಂದುವರಿಯಬೇಕು. ವ್ಯಕ್ತಿತ್ವ ವಿಕಾಸಕ್ಕಾಗಿ
ಮಾಡುತ್ತಿರುವ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು
ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್,
ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಹೆಚ್. ಜಿ. ಶ್ರೀಧರ್,
ಭಾರತೀಯ ಸಂಸ್ಕೃತಿ ಮತ್ತು ಲಲಿತ ಕಲೆಗಳ ಅಧ್ಯಯನ ಕೇಂದ್ರದ
ಸAಯೋಜಕಿ ಡಾ. ವಿದ್ಯಾ ಎಸ್. ಉಪಸ್ಥಿತರಿದ್ದರು.
ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ ಹರಿಪ್ರಸಾದ್ ಈಶ್ವರಮಂಗಲ ಸ್ವಾಗತಿಸಿ,
ಪಂಚಮಿ ಬಾಕಿ¯ಪದವು ನಿರೂಪಿಸಿ, ಸುಲಕ್ಷಣಾ ಶರ್ಮಾ ವಂದಿಸಿದರು. ಅನನ್ಯ ಮತ್ತು
ಪೂಜಿತಾ ಪ್ರಾರ್ಥಿಸಿದರು.

Related News

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ: ಪ್ರೊ.ಬಿ. ವೆಂಕಟರಾಜ;

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ:…

ಪುತ್ತೂರು, ಮೇ 22: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯಗುಣ…

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ ಜವಾಬ್ದಾರಿ ಹಿರಿದು: ಡಾ. ಪಂಕಜ್ ದ್ವಿವೇದಿ;

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ…

ಪುತ್ತೂರು ಮೇ.19: ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರುಚಟುವಟಿಕೆಗಳನ್ನು…

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ;

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ.…

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ…