
ಪುತ್ತೂರು: ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಕಾಲೇಜು,
ಕನ್ನಡ ಸಂಘ ಹಾಗೂ ಅನ್ನಪೂರ್ಣ ಪಬ್ಲಿಷಿಂಗ್ ಹೌಸ್ ಬೆಂಗಳೂರು
ಇದರ ಆಶ್ರಯದಲ್ಲಿ ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ
ಹಾಗೂ ವಿಜ್ಞಾನ(ಸ್ವಾಯತ್ತ) ಕಾಲೇಜಿನ ಪರೀಕ್ಷಾಂಗ ಕುಲಸಚಿವ
ಡಾ.ಎಚ್.ಜಿ ಶ್ರೀಧರ ಅವರ ‘ಬಯಲು’ ಅಲ್ಲಮನ ಕಥನ ಕೃತಿ
ಬಿಡುಗಡೆಯಾಗಲಿದೆ.
ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನ ಸಭಾಂಗಣದಲ್ಲಿ ಸಂಜೆ 6
ಗಂಟೆಗೆ ಈ ಕರ್ಯಕ್ರಮ ನಡೆಯಲಿದ್ದು ಕೃತಿಯನ್ನು
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ
ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಲೋಕಾರ್ಪಣೆ ಮಾಡಲಿದ್ದಾರೆ.
ಕರ್ಯಕ್ರಮದ ಅಧ್ಯಕ್ಷತೆಯನ್ನು ಶಿಕ್ಷಣ ತಜ್ಞ ನಾಡೋಜ
ಡಾ.ವೂಡೇ.ಪಿ.ಕೃಷ್ಣ ವಹಿಸಲಿದ್ದು ಕೃತಿಯ ಕುರಿತು ವಂದೇ
ಮಾತರA ಪಾಠಶಾಲಾ ಸಂಸ್ಥಾಪಕ ಡಾ.ಜಿ.ಬಿ ಹರೀಶ ಮಾತನಾಡಲಿದ್ದಾರೆ
ಎಂದು ಪ್ರಕಟಣೆಯಲ್ಲಿ ಕೃತಿಕಾರ ಡಾ.ಶ್ರೀಧರ ಎಚ್.ಜಿ ತಿಳಿಸಿದ್ದಾರೆ.