News & Updates

ವಿವೇಕಾನಂದ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿ ನೆನಪುಕಾರ್ಯಕ್ರಮ.

ಕಾರ್ಗಿಲ್ ಬದುಕನ್ನು ನೆನೆದು ಭಾವುಕರಾದ ಲೆ.ಕರ್ನಲ್ ಅಶೋಕ್ ಕಿಣಿ
ಪುತ್ತೂರು, ಜು. ೨೬:
ಕಾರ್ಗಿಲ್ ಯುದ್ದ ಭಾರತ ಎಂದೆಂದಿಗೂ ಮರೆಯಲಾಗದ ಯುದ್ದ. ಸೈನಿಕರು
ದೇಶಭಕ್ತಿ ಮತ್ತು ದೇಶ ಸೇವೆ ಮಾಡಬೇಕು ಎಂಬ ಮನಸ್ಸು ಬಂದಾಗ ಅವರು
ಯಾವುದೇ ಕಾರ್ಯಕ್ಕೂ ಸಿದ್ಧರಿರುತ್ತಾರೆ . ಕಾರ್ಗಿಲ್ ಯುದ್ಧದ ಸಮಯದಲ್ಲಿ
ಅದೆಷ್ಟೋ ವೀರ ಸೈನಿಕರು ತಮ್ಮ ಪ್ರಾಣವನ್ನು ರಾಷ್ಟ್ರಕ್ಕಾಗಿ ಮುಡಿಪಿಡಲು
ತಾವಾಗಿಯೇ ಮುಂದೆ ಬಂದಿದ್ದಾರೆ. ಕಾರ್ಗಿಲ್ ಯುದ್ದದಲ್ಲಿ ೫೨೭ ಸೈನಿಕರು ತಮ್ಮ
ನಾಳೆಯನ್ನು ನಮಗಾಗಿ ಸಮರ್ಪಿಸಿದ್ದಾರೆ. ನಾವೆಲ್ಲರೂ ದೇಶಕ್ಕಾಗಿ ಚಿಂತನೆ
ಮಾಡುವುದರೊಂದಿಗೆ ದೇಶ ಸೇವೆಗೆ ಅವಕಾಶ ಸಿಕ್ಕರೆ, ಯಾವುದೇ ಕಾರಣಕ್ಕೂ
ಅದನ್ನು ಬಿಡಬಾರದು. ಯುವಜನಾಂಗ ರಾಷ್ಟ್ರದ ಭವಿಷ್ಯ ಆದ್ದರಿಂದ ವಿದ್ಯಾರ್ಥಿಗಳು
ಸ್ವಯಂ ಪ್ರೇರಿತರಾಗಿ ದೇಶ ರಕ್ಷಣೆಯ ಮೌಲ್ಯವನ್ನು ಅಳವಡಿಸಿಕೊಳ್ಳುವುದು
ಅಗತ್ಯ ಎಂದು ಲೆಫ್ಟಿನೆಟ್ ಕರ್ನಲ್, ಫಾರ್ಮರ್ ಕಂಮ್ಪ್ಟ್ರೋಲರ್
ಅಶೋಕ್ ಕಿಣಿ ಎಚ್ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಇಲ್ಲಿ ಎನ್.ಸಿ.ಸಿ ಮತ್ತು ಐಕ್ಯೂಎಸಿ ಐಕ್ಯೂಎಸಿ ಘಟಕದ
ಸಹಯೋಗದಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವದ ಬೆಳ್ಳಿನೆನಪು
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ.ಕೆ. ಎಂ ಕೃಷ್ಣ
ಭಟ್, ನಮ್ಮ ದೇಶವನ್ನು ರಕ್ಷಣೆ ಮಾಡುವ ಸೈನಿಕ, ಉಳುಮೆ ಮಾಡುವ
ರೈತ, ಜೀವಕ್ಕೆ ರಕ್ಷಣೆ ಒದಗಿಸುವ ವೈದ್ಯ ಮತ್ತು ವಿಜ್ಞಾನಿಗಳು ನಮ್ಮೆಲ್ಲರಿಗೂ
ಮಾದರಿ. ನಾವೆಲ್ಲರೂ ರಾಷ್ಟ್ರಾಭಿಮಾನದಿಂದ ಬದುಕೋಣ ಎಂದು ತಮ್ಮ
ಅಧ್ಯಕ್ಷೀಯ ಮಾತುಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಭಾರತೀಯ ಭೂ ಸೇನೆಯ ನಿವೃತ್ತ ಯೋಧ ವಿದೀಪ್
ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ . ವಿಷ್ಣು ಗಣಪತಿ ಭಟ್, ವಿಶೇಷ
ಅಧಿಕಾರಿ ಹಾಗೂ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಶ್ರೀಧರ್ ನಾಯ್ಕ್.ಬಿ, ಐಕ್ಯೂಎಸಿ
ಘಟಕದ ಸಂಯೋಜಕ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಶಿವಪ್ರಸಾದ್ ಕೆ.
ಎಸ್,ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಲೆ. ಭಾಮಿ. ಅತುಲ್ ಶೆಣೈ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ
ಮುರಳಿಕೃಷ್ಣ ಕೆ ಎನ್ ಸ್ವಾಗತಿಸಿ, ಪರೀಕ್ಷಾಂಗ ಕುಲ ಸಚಿವ ಡಾ. ಹೆಚ್. ಜಿ ಶ್ರೀಧರ್
ವಂದಿಸಿ,ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಶ್ರೀಶ ಕುಮಾರ್ ಎಂ.ಕೆ ನಿರ್ವಹಿಸಿದರು.

ಃox

  • ಅತಿಥಿಗಳು ಕಾರ್ಗಿಲ್ ಸ್ಮಾರಕದ ಮಾದರಿ ಹಾಗು ತಾಯಿ ಭಾರತಮಾತೆ, ಸ್ವಾಮಿ
    ವಿವೇಕಾನಂದರ ಹಾಗೂ ಡಾ.ಎ.ಪಿ.ಜೆ ಅಬ್ದುಲ್ ಕಲಾಂರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ
    ಮಾಡುವುದರ ಮೂಲಕ ವೇದಿಕೆಗೆ ಆಗಮಿಸಿದರು.
    *ಲೆಫ್ಟಿನೆಟ್ ಕರ್ನಲ್, ಫಾರ್ಮರ್ ಕಂಮ್ಪ್ಟ್ರೋಲರ್ ಅಶೋಕ್ ಕಿಣಿ
    ಅವರನ್ನು ಸನ್ಮಾನಿಸಲಾಯಿತು.

*ಕಾರ್ಯಕ್ರಮದಲ್ಲಿ ಎನ್ ಸಿ ಸಿ ಘಟಕದ ವಿದ್ಯಾರ್ಥಿಗಳು ಕಾರ್ಗಿಲ್ ಯುದ್ಧದ ದೃಶ್ಯ
ರೂಪಕವನ್ನು ಪ್ರದರ್ಶಿಸಿದರು.

Related News

ವಿವೇಕಾನಂದ ವಿದ್ಯಾವರ್ಧಕ ಸಂಘದಿoದ ಬಾಂಗ್ಲಾವಿರುದ್ಧ ಮಾನವ ಸರಪಳಿ ಮೂಲಕ ಜನಜಾಗೃತಿ ಜಾಥಾ

ವಿವೇಕಾನಂದ ವಿದ್ಯಾವರ್ಧಕ ಸಂಘದಿoದ ಬಾಂಗ್ಲಾವಿರುದ್ಧ ಮಾನವ…

ಪುತ್ತೂರು: ಬಾಂಗ್ಲಾ ದೇಶದಲ್ಲಿ ನಡೆಯುತ್ತಿರುವಹಿಂಸಾಚಾರವನ್ನು ವಿರೋಧಿಸಿ ಹಾಗೂ…

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ವಿವೇಕಾನಂದ ಕಾಲೇಜಿನಲ್ಲಿ ತುಳುನೆಂಪು ಕಾರ್ಯಕ್ರಮ-05-08-2024

ಪುತ್ತೂರು,ಅ.೫: ಆಟಿ ಎಂದರೆ ಅದು ಬೇಸಾಯದ ತಿಂಗಳು.…