
ಪುತ್ತೂರು: ಭಾರತೀಯರು ಇಂದು ಎಲ್ಲಾ ಕ್ಷೇತ್ರಗಳಲ್ಲಿ
ಮಹತ್ತರವಾದ ಸಾಧನೆಯನ್ನು ಮಾಡುತ್ತಿದ್ದಾರೆ. ಅದರಂತೆ
2027 ನೇ ಇಸವಿಯಲ್ಲಿ ಚಂದ್ರನ ಮೇಲೆ ಭಾರತೀಯರು
ಕಾಲಿಡುವತ್ತ, ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ
ಇಸ್ರೋ ಮುನ್ನಡೆಯುತ್ತಿದೆ ಎಂದು ಎಂಐಟಿ ಮಣಿಪಾಲ
ಪ್ರಾಧ್ಯಪಕ ಡಾ. ಮಹೇಶ್. ಎಂ. ಜಿ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿನ ಭೌತಶಾಸ್ತ್ರ ವಿಭಾಗ
ಮತ್ತು ಐಕ್ಯೂಎಸಿ ಜಂಟಿ ಆಶ್ರಯದಲ್ಲಿ, ರಾಷ್ಟ್ರೀಯ ಬಾಹ್ಯಕಾಶ
ದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಂಪನ್ಮೂಲ
ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ,
ಇವರು ಡಾ. ವಿಕ್ರಂ ಸಾರಾಭಾಯಿಯವರ ದೂರದರ್ಶಿತ್ವದಲ್ಲಿ,
ಭಾರತದಲ್ಲಿ ಆರಂಭಗೊAಡ ಬಾಹ್ಯಕಾಶ ಸಂಬAಧಿಸಿದ
ಕಾರ್ಯಕ್ರಮಗಳು ಈಗ ಜಗತ್ತಿನ ಅತ್ಯಂತ ಪ್ರಮುಖ
ಬಾಹ್ಯಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ದ ಮೂಲಕ
ಮುಂದುವರಿಯುತ್ತಿದೆ. ಚಂದ್ರಯಾನ, ಮಂಗಳಯಾನ
ಹಾಗು ಆದಿತ್ಯ ಯೋಜನೆಗಳು ಇಸ್ರೋ ದ ಪ್ರಮುಖ
ಯೋಜನೆಗಳಾಗಿವೆ ಎಂದು ವಿವರಿಸಿದರು. ಹಾಗೆಯೇ ಇಸ್ರೋ
ನಡೆದು ಬಂದ ದಾರಿ, ವಿವಿಧ ಮೈಲುಗಲ್ಲುಗಳು ಮತ್ತು
ಮುಂದಿನ ಯೋಜನೆಗಳಾದ, ಬಾಹ್ಯಕಾಶ ನಿಲ್ದಾಣದ ಸ್ಥಾಪನೆ,
ಭಾರತೀಯರು ಚಂದ್ರನ ಮೇಲೆ ಇಳಿಯುವ ಯೋಜನೆಗಳು
ಹಾಗೂ ಸೂರ್ಯನ ಅಧ್ಯಯನದ ಬಗ್ಗೆ ವಿದ್ಯಾರ್ಥಿಗಳಿಗೆ
ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ
ಕಾಲೇಜಿನ ಉಪ ಪ್ರಾಂಶುಪಾಲ ಶ್ರೀಕೃಷ್ಣಗಣರಾಜ ಭಟ್,
ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶಿವಪ್ರಸಾದ್ ,ಐಕ್ಯೂಎಸಿ
ಸಂಯೋಜಕಿ ಡಾ. ರವಿಕಲಾ, ವಿದ್ಯಾರ್ಥಿ ಸೃಜೇಶ್ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ತೃತೀಯ ಬಿಎಸ್ಸಿ ವಿದ್ಯಾರ್ಥಿಗಳಾದ, ಅಶ್ವಥಿ
ಸ್ವಾಗತಿಸಿ, ಸೃಜೇಶ್. ಕುಮಾರ್ ವಂದಿಸಿ, ಅಂಕಿತಾ ಮತ್ತು ಚೈತ್ರ
ನಿರ್ವಹಿಸಿದರು.