News & Updates

ವಿವೇಕಾನಂದ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಿಂದ ಉತ್ಕರ್ಷ ಕರ‍್ಯಕ್ರಮ;

ಜೀವನದ ಅನುಭವವೇ ಎಂದಿಗೂ ಮೇಲು – ಶಿವಶಂಕರ್ ನಾಯಕ್
ಪುತ್ತೂರು; ವೃದ್ಧರಿಗೂ ಉತ್ಸಾಹ ತುಂಬುವAತಹಾ
ಕಾರ್ಯತತ್ಪರತೆ ಯುವಕರಲ್ಲಿರಬೇಕು. ಬಂಗಾರದAತಹ
ವಿದ್ಯಾರ್ಥಿ ಜೀವನದಲ್ಲಿ ಸಾಗುವ ದಾರಿ ಒಳಿತಿನ ಕಡೆಗೆ ಇರಬೇಕು.
ಅಧ್ಯಾಪಕರಿಗೆ ಹಾಗೂ ಪೋಷಕರಿಗೆ ಮೋಸ ಮಾಡಕೂಡದು.
ಜೀವನದ ಅನುಭವ ಎಂದಿಗೂ ಮೇಲು &quoಣ; ಎಂದು ರೈತಬಂಧು
ಆಹಾರೋದ್ಯಮ ಪ್ರೈವೆಡ್ ಲಿಮಿಟೆಡ್ ಸಂಸ್ಥೆಯ ಕಾರ್ಯನಿರ್ವಾಹಕ
ನಿರ್ದೇಶಕ ಶಿವಶಂಕರ್ ನಾಯಕ್ ನುಡಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ, ವಿಜ್ಞಾನ, ವಾಣಿಜ್ಯ
ಮಹಾವಿದ್ಯಾಲಯ ( ಸ್ವಾಯತ್ತ ) ಇಲ್ಲಿ ವಾಣಿಜ್ಯ ವಿಭಾಗ, ವಾಣಿಜ್ಯ ಸಂಘ
ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ ಉತ್ಕರ್ಷ ‘
ಶೀರ್ಷಿಕೆಯ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮವನ್ನು ಉದ್ಘಾಟಿಸಿ
ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಜಗನ್ನಾಥ್ ಎ ಅಧ್ಯಕ್ಷೀಯ
ನುಡಿಗಳನ್ನಾಡಿ &quoಣ; ಎಷ್ಟೋ ಹುದ್ದೆಗಳಿಗೆ ಜನರ ಅವಶ್ಯಕತೆ ಇದೆ.
ವಿದ್ಯಾರ್ಥಿಗಳು ಅವುಗಳತ್ತ ಗಮನ ಹರಿಸಬೇಕು. ಉದ್ಯೋಗ
ಪಡೆದುಕೊಂಡವರು ಇನ್ನೂ ಹಲವರಿಗೆ ಉದ್ಯೋಗ ನೀಡವಂತೆ
ಬೆಳೆಯಬೇಕು &quoಣ; ಎಂದರು.
ಐಕ್ಯೂಎಸಿಯ ಸಂಯೋಜಕಿ ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.
ರವಿಕಲಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ
ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಕಾರ್ಯಕ್ರಮಕ್ಕೆ
ಶುಭಹಾರೈಸಿದರು.
ಸಮಾರೋಪ ಸಮಾರಂಭ:
ಕರ‍್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ
ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ ಹಿರಿಯ ವಿದ್ಯಾರ್ಥಿ ಸುಹಾಸ್ ಮರಿಕೆ
ಮಾತನಾಡಿ, ಸ್ವಂತ ಉದ್ಯಮವನ್ನು ನಮಗೆ ಬೇಕಾಗುವ ಹಾಗೆ
ಮಾಡಿಕೊಳ್ಳುವುದರ ಜೊತೆಗೆ ನಮ್ಮ ವ್ಯಕ್ತಿತ್ವಕ್ಕೆ ಹಾಗೂ
ತಮ್ಮ ದಾರಿಗೆ ಯಾವುದು ಸೂಕ್ತ ಎಂದು ನಾವೇ
ಕಂಡುಕೊಳ್ಳಬೇಕು. ಉದ್ಯೋಗವನ್ನು ಹುಟ್ಟುಹಾಕಿ ಅದರ

ವ್ಯಾಪ್ತಿಯನ್ನು ಹೆಚ್ಛಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು
ನೀಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಸಂಚಾಲಕ ಮುರಳಿಕೃಷ್ಣ ಕೆ.ಎನ್
ಮಾತನಾಡಿ, ಸಾವಯವ ಕೃಷಿಯ ಪ್ರಾಮುಖ್ಯತೆ ತಿಳಿಯಲು ನಾವು
ಹೊಸ ರೀತಿಯ ಉಪಾಯ ಹುಡುಕಿಕೊಂಡು ಹೋದರೆ ಒಂದು
ಉತ್ತಮ ರೀತಿಯ ಉದ್ಯಮವನ್ನು ಮಾಡಬಹುದು ಎಂದು
ಅಭಿಪ್ರಾಯಪಟ್ಟರು.
&quoಣ;ಉತ್ಕರ್ಷ&quoಣ; 2025ರ ಕೌಶಲ್ಯಾಭಿವೃದ್ಧಿಯ ಪ್ರಶಸ್ತಿಯನ್ನು
ದ್ವಿತೀಯ ವಾಣಿಜ್ಯ’ ಸಿ’ ವಿಭಾಗದ ಮತ್ತು ದ್ವಿತೀಯ ವಾಣಿಜ್ಯವಿಭಾಗದ ‘ ಬಿ
‘ವಿದ್ಯಾರ್ಥಿಗಳು ಪಡೆದರು. ಕಾರ್ಯಕ್ರಮವನ್ನು
ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕಿ ಚರಿಷ್ಮಾ
ಸ್ವಾಗತಿಸಿ ಸುಬ್ರಹ್ಮಣ್ಯ ವಂದಿಸಿದರು. ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಪುಣ್ಯ
ಹಾಗೂ ಅಮೃತಾ ನಿರೂಪಿಸಿದರು.

Related News

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ: ಪ್ರೊ.ಬಿ. ವೆಂಕಟರಾಜ;

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ:…

ಪುತ್ತೂರು, ಮೇ 22: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯಗುಣ…

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ ಜವಾಬ್ದಾರಿ ಹಿರಿದು: ಡಾ. ಪಂಕಜ್ ದ್ವಿವೇದಿ;

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ…

ಪುತ್ತೂರು ಮೇ.19: ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರುಚಟುವಟಿಕೆಗಳನ್ನು…

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ;

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ.…

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ…