
ಪುತ್ತೂರು: ಇಲ್ಲಿನ ಕಲಾ, ವಾಣಿಜ್ಯ ಮತ್ತು
ವಿಜ್ಞಾನ(ಸ್ವಾಯತ್ತ) ಮಹಾವಿದ್ಯಾಲಯ ಇಲ್ಲಿನ ಎನ್ಸಿಸಿ, ರೆಡ್ಕ್ರಾಸ್
ಹಾಗೂ ಎನ್ಎಸ್ಎಸ್ ಘಟಕ ಹಾಗೂ ಕಾಲೇಜಿನ ಐಕ್ಯೂಎಸಿ ಇದರ
ಸಹಯೋಗದಲ್ಲಿ ಪುತ್ತೂರಿನ ರೈಲ್ವೇ ಸ್ಟೇಷನ್ ಬಳಿ
ಸ್ವಚ್ಛತಾ ಕರ್ಯಕ್ರಮ ನಡೆಯಿತು. &#೩೯;ಸ್ವಚ್ಛತಾ ಹಿ ಸೇವಾ&#೩೯;
ಎನ್ನುವ ಅಭಿಯಾನದಡಿಯಲ್ಲಿ ನಡೆದ ಈ ಕರ್ಯದಲ್ಲಿ
ಕಾಲೇಜಿನ ಎನ್ಸಿಸಿ ಅಧಿಕಾರಿ ಲೆ.ಭಾಮಿ ಅತುಲ್ ಶೆಣೈ, ಎನ್ಎಸ್ಎಸ್
ಅಧಿಕಾರಿ ಡಾ. ಅರುಣ್ ಪ್ರಕಾಶ್, ರೆಡ್ ಕ್ರಾಸ್ ಘಟಕದ
ಸಂಯೋಜಕಿ ಡಾ.ದುರ್ಗಾ ರತ್ನ ಹಾಗೂ ರೈಲ್ವೇ ಸ್ಟೇಷನ್
ನ ಅಧಿಕಾರಿಗಳು ಉಪಸ್ಥಿತರಿದ್ದು ಸಂಗ್ರಹವಾದ ಸುಮಾರು
೭೦ ಕೆ.ಜಿ ಯಷ್ಟು ತ್ಯಾಜ್ಯವನ್ನು ವಿದ್ಯಾರ್ಥಿಗಳು ಪುತ್ತೂರು
ಪುರಸಭೆಗೆ ಹಸ್ತಾಂತರಿಸಲಾಯಿತು.