News & Updates

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ1967-70 ಸಾಲಿನಬಿ.ಎಸ್ಸಿಯ ಬಿಝೆಡ್ ಸಿ ಹಿರಿಯ ವಿದ್ಯಾರ್ಥಿಗಳ ಮರು ಸಮ್ಮಿಲನ;

ವಿವೇಕಾನಂದ ಸ್ವಾಯತ್ತ ಮಹಾವಿದ್ಯಾಲಯದ1967-70 ಸಾಲಿನ
ಬಿ.ಎಸ್ಸಿಯ ಬಿಝೆಡ್ ಸಿ ಹಿರಿಯ ವಿದ್ಯಾರ್ಥಿಗಳ ಮರು ಸಮ್ಮಿಲನ
ಪುತ್ತೂರು : ‘ಸಮಾಜದ ಮೌಲ್ಯಗಳು ಕುಗ್ಗುತ್ತಿರುವ
ಪ್ರಸ್ತುತ ಸಂದರ್ಭದಲ್ಲಿ ವಿವೇಕಾನಂದ ಸಂಸ್ಥೆಯ ಹಿರಿಯ
ವಿದ್ಯಾರ್ಥಿಗಳು ತಾವು ಅಧ್ಯಯನ ಮಾಡಿ ಹೊರಗೆ ಹೋದ ಹಲವು
ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದು ಸೇರಿರುವುದು ಒಂದು
ಉತ್ತಮ ಸಂಗತಿಯಾಗಿದೆ. ಹಿರಿಯ ವಿದ್ಯಾರ್ಥಿಗಳು ವಿದ್ಯಾ ಸಂಸ್ಥೆಗೆ
ದೊಡ್ಡ ಅಸ್ತಿ. ಈ ಮೂಲಕ ಪ್ರಸ್ತುತ ಅಧ್ಯಯನ
ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿ ಅವರೊಂದಿಗೆ
ಹಿರಿಯ ವಿದ್ಯಾರ್ಥಿಗಳು ಸಂಪರ್ಕದಲ್ಲಿರಬೇಕು. ಹೀಗೆ ಎಲ್ಲರೂ ಸೇರಿ
ಶಿಕ್ಷಣವನ್ನು ಒಗ್ಗಟ್ಟಾಗಿ ಬೆಳೆಸಬಹುದು’. ಎಂದು ವಿವೇಕಾನಂದ
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಪ್ರೊ. ಶ್ರೀಪತಿ
ಕಲ್ಲೂರಾಯ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಲಾ,ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ (ಸ್ವಾಯತ್ತ) ಪುತ್ತೂರು ಇಲ್ಲಿನ ಬೈಂದೂರು
ಪ್ರಭಾಕರ್ ರಾವ್ ಸಭಾಭವನನದಲ್ಲಿ ನಡೆದ 1967-1970ರ ಬಿ.ಎಸ್ಸಿಯ
ಬಿಝೆಡ್ ಸಿಯ ಹಿರಿಯ ವಿದ್ಯಾರ್ಥಿಗಳು ಅಧ್ಯಯನ ಮಾಡಿ ಹೊರಗೆ
ಹೋಗಿ 55 ವರ್ಷಗಳ ನಂತರ ನಡೆದ ಮೊದಲ ಮರು ಸಮ್ಮಿಲನ
ಕಾರ್ಯಕ್ರಮದ ಅಧ್ಯಕ್ಷರಾಗಿ ಮಾತನಾಡಿದರು.
ಕಾರ್ಯಕ್ರಮಮದಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ ಕಾಲೇಜಿನ
ರಸಾಯನ ಶಾಸ್ತ್ರ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.
ಸುಂದರ್ ಭಟ್ ಮಾತನಾಡಿ, ‘ ಗುರುವಿನ ಮಹತ್ವ ಯಾವಾಗಲೂ
ಅವರ ವಿದ್ಯಾರ್ಥಿಗಳು ನೀಡುವ ಗೌರವದಲ್ಲಿ ಅಡಗಿರುತ್ತದೆ ಮತ್ತು
ಗುರು ಶಿಷ್ಯರ ನಡುವೆ ಯಾವಾಗಲು ಉತ್ತಮ ಸಂಬAಧ
ಬೆಳೆಯುವುದು ಮುಖ್ಯ ‘ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಿವೃತ್ತ ವಿಶ್ರಾಂತ ಪ್ರಾಧ್ಯಾಪಕರುಗಳಾದ
ಸುಂದರ ಭಟ್, ವಿ. ಬಿ. ಅರ್ತಿಕಜೆ, ಎ. ವಿ ನಾರಾಯಣ ಹಾಗೂ ವತ್ಸಲಾ ರಾಜ್ಞಿ
ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ
ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್, ಕಾಲೇಜಿನ ಹಿರಿಯ ವಿದ್ಯಾರ್ಥಿ
ಸಂಘದ ಅಧ್ಯಕ್ಷ ಸತೀಶ್ ರಾವ್ ಮೊದಲಾದವರು ಉಪಸ್ಥಿತರಿದ್ದರು.


ಕೃಷಿಕ ಬಾಲಕೃಷ್ಣ ಕೊಲಾರಿ, ವಿಶ್ರಾಂತ ವಿಜಯ ಬ್ಯಾಂಕ್ ಉದ್ಯೋಗಿ
ಚಂದ್ರಶೇಖರ ರೈ, ಮುಂಬಯಿಯ ನ್ಯಾಯವಾದಿ ಗಂಗಾಧರ

ಶಾಸ್ತ್ರಿ, ಕೃಷಿಕ ಗಣಪತಿ ಭಟ್ ಕೊನಡ್ಕ, ವಿಶ್ರಾಂತ ಶಿಕ್ಷಕ
ಗೋವಿಂದ ಚಿಪ್ಳುಂಕರ್, ಬೆಂಗಳೂರಿನ ನೋಟರಿ ಇದಿನಬ್ಬ ಅಡೆಂಬಳ,
ವಿಶ್ರಾAತ ವಿಜಯ ಬ್ಯಾಂಕ್ ಉದ್ಯೋಗಿ ಲಕ್ಷ್ಮೀನಾರಾಯಣ ಶೆಟ್ಟಿ, ವಿಶ್ರಾಂತ
ಕೆನರಾ ಬ್ಯಾಂಕ್ ಉದ್ಯೋಗಿ ಶ್ರೀಶ ಪೈ, ಮಂಗಳೂರಿನ ನ್ಯಾಯವಾದಿ
ತಿರುಮಲೇಶ್ವರ ಭಟ್ ಒಡಿಯೂರು ಮತ್ತು ಕೇರಳದ
ಗ್ರಾಮೀಣ ಬ್ಯಾಂಕ್ ನ ವಿಶ್ರಾಂತ ಉದ್ಯೋಗಿ ಶ್ರೀಧರ ಕೆದಿಲಾಯ
ಇವರುಗಳು ಭಾಗವಹಿಸಿ 55 ವರ್ಷಗಳ ಹಿಂದಿನ ವಿದ್ಯಾರ್ಥಿ
ಜೀವನವನ್ನು ಮೆಲುಕು ಹಾಕಿ ಸಂಭ್ರಮಿಸಿದರು.
ಮುAಬಯಿಯ ನ್ಯಾಯವಾದಿ ಹಾಗೂ ಹಿರಿಯ ವಿದ್ಯಾರ್ಥಿ ಗಂಗಾಧರ
ಶಾಸ್ತ್ರೀ ಪ್ರಾರ್ಥಿಸಿ, ಕಾರ್ಯಕ್ರಮ ನಿರ್ವಹಿಸಿದರು.

Related News

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ: ಪ್ರೊ.ಬಿ. ವೆಂಕಟರಾಜ;

ಪ್ರಶ್ನೆಗಳು ಹುಟ್ಟುವವರೆಗೆ ನಮ್ಮ ಸಂಶೋಧನೆ ಸರಿಹಾದಿಯಲ್ಲಿರುತ್ತೆ:…

ಪುತ್ತೂರು, ಮೇ 22: ಪ್ರತಿಯೊಬ್ಬ ವ್ಯಕ್ತಿಯಲ್ಲೂ ಸಂಶೋಧನೆಯಗುಣ…

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ ಜವಾಬ್ದಾರಿ ಹಿರಿದು: ಡಾ. ಪಂಕಜ್ ದ್ವಿವೇದಿ;

ವಿವೇಕಾನಂದ ಕಾಲೇಜಿನಲ್ಲಿ ಭಾಷಾ ಕಾರ್ಯಾಗಾರದ ಉದ್ಘಾಟನೆಭಾಷಾಶಿಕ್ಷಕರ…

ಪುತ್ತೂರು ಮೇ.19: ಭಾಷಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಹಲವಾರುಚಟುವಟಿಕೆಗಳನ್ನು…

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ. ಶ್ರೀಪತಿ ಕಲ್ಲೂರಾಯ;

ಮಕ್ಕಳಿಗೆ ಸರಿದಾರಿ ತೋರಿಸುವವರು ನಾವು: ಡಾ.…

ಪುತ್ತೂರು, ಮೇ 16: ಮಕ್ಕಳ ಭವಿಷ್ಯದ ಚಿಂತೆ…