ಪುತ್ತೂರು,ಆ.29: ಶಿಕ್ಷಣ ಎಂದರೆ ಕೇವಲ ಅಂಕಗಳಿಕೆ ಮಾತ್ರ
ಸೀಮಿತವಲ್ಲ. ಅದು ವ್ಯವಹಾರ ಜ್ಞಾನಕ್ಕಿರುವ ಸಂಗತಿ. ನಮ್ಮ
ಶೈಕ್ಷಣಿಕ ಹಂತದ ನಂತರ ಬದುಕು ಕಟ್ಟಿಕೊಳ್ಳಲು
ಸಾಂಸ್ಕೃತಿಕ ಕಾರ್ಯಕ್ರಮ ಸಹಾಯ ಮಾಡುತ್ತದೆ. ಇದೇ ರೀತಿಯ
ಒಂದು ವಿನೂತನವಾದ ಕಾರ್ಯಕ್ರಮವನ್ನು ನಮ್ಮ ಕಾಲೇಜಿನಲ್ಲಿ
ಹಮ್ಮಿಕೊಂಡಿದ್ದೇವೆ. ಕೀರ್ತಿಶೇಷ ದಿ.ಪಾದೆಕಲ್ಲು ನಾರಾಯಣ ಭಟ್
ಇವರ ಜನ್ಮ ಶತಮಾನೋತ್ಸವದ ಸವಿ ನೆನಪಿನಲ್ಲಿ ನಡೆಯುವಂತ
ರಾಮಾಯಣ ಹಾಗೂ ವಾಲ್ಮೀಕಿಯ ಕುರಿತಾದ ಈ ಕಾರ್ಯಕ್ರಮ
ಎಲ್ಲರಿಗೂ ಸದುಪಯೋಗವಾಗಲಿ ಎಂದು ಕಾಲೇಜಿನ ಆಡಳಿತ
ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯ( ಸ್ವಾಯತ್ತ) ಪುತ್ತೂರು ವಿವೇಕಾನಂದ
ಸAಶೋಧನಾ ಕೇಂದ್ರ, ದೇರಾಜೆ ಸೀತಾರಾಮಯ್ಯ ಯಕ್ಷಗಾನ
ಅಧ್ಯಯನ ಕೇಂದ್ರ, ಯಕ್ಷ ರಂಜಿನಿ, ಕನ್ನಡ ಸಂಘ ಮತ್ತು
ಐಕ್ಯೂಎಸಿ ಇದರ ಸಹಯೋಗದಲ್ಲಿ ಕೀರ್ತಿಶೇಷ ಪಾದೇಕಲ್ಲು
ನಾರಾಯಣ ಭಟ್ಟರ ಜನ್ಮಶತಮಾನೋತ್ಸವದ ಸವಿನೆನಪಿನಲ್ಲಿ ವಾಲ್ಮೀಕಿ
ರಾಮಾಯಣದ ಪಾತ್ರಗಳ ಅಂತರoಗ ನಿರೂಪಣೆ-10 ಇದರ
ವತಿಯಿಂದ ಆಯೋಜಿಸಲಾದ ವಾಲ್ಮೀಕಿ ಕಾರ್ಯಕ್ರಮವನ್ನು ದೀಪ
ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ರಾಂತ ಪ್ರಾಚಾರ್ಯ ಡಾ. ಪಾದೇಕಲ್ಲು ವಿಷ್ಣು
ಭಟ್ಟ ಆಶಯದ ನುಡಿಗಳನ್ನಾಡುತ್ತ, ಕೀರ್ತಿ ಶೇಷ ಪಾದೆಕಲ್ಲು
ನಾರಾಯಣ ಭಟ್ ಹಲವು ರಂಗದಲ್ಲಿ ಹೆಸರು ಗಳಿಸಿದವರು
ಮಾತ್ರವಲ್ಲದೆ ಕೃಷಿಕರಾಗಿಯೂ ಸೇವೆ ಸಲ್ಲಿಸಿದವರು. ಅವರ
ಜನ್ಮದಿನದಂದು ಅವರ ನೆನಪನ್ನು ವಿಸ್ತರಿಸುವ ನಿಟ್ಟಿನಲ್ಲಿ ಸರ್ವರಿಗೂ
ಸದುಪಯೋಗವಾಗಲಿ ಎಂದು ವಾಲ್ಮೀಕಿ ರಾಮಾಯಣದ ಬಗೆಗೆ
ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ
ಮುರಳಿಕೃಷ್ಣ ಕೆ.ಎನ್, ಕಾಲೇಜಿನ ಪರೀಕ್ಷಾಂಗ ಕುಲಸಚಿವ
ಡಾ.ಶ್ರೀಧರ ಎಚ್.ಜಿ, ಕಾಲೇಜಿನ ಆಡಳಿತ ಮಂಡಳಿ ಸದಸ್ಯೆ ಶುಭಾ ಅಡಿಗ
, ವಿದ್ವಾನ್ ಕೇಕಣಾಜೆ ಕೇಶವ ಭಟ್, ಉಪಸ್ಥಿತರಿದ್ದರು.
ನಂತರ ಕಾರ್ಯಕ್ರಮದಲ್ಲಿ ವಿದ್ವಾನ್ ಉಮಾಕಾಂತ್ ಭಟ್ ಕೆರೆಕೈ
ಅವರು ಮಾತನಾಡಿ, ಸಾಮಾನ್ಯರೊಳಗೆ ಸಾಮಾನ್ಯರಂತೆ ಬದುಕಿ ಊರಿಗೆ
ಬೆಳಕು ಕೊಟ್ಟವರು ನಾರಾಯಣ ಭಟ್. ಅಂತೆಯೇ ತಮ್ಮ
ಪುತ್ರನ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಪುತ್ರ ಡಾ.
ಪಾದೆಕಲ್ಲು ವಿಷ್ಣುಭಟ್ಟರ ಮುಖಾಂತರ ಬೆಳಕು ನೀಡಿದ್ದಾರೆ
ಎಂದರು.
ನAತರ ಇವರು ವಾಲ್ಮಿಕಿಯ ಅಂತರAಗದ ಚಿತ್ರಣವನ್ನು
ಅದ್ಭುತವಾಗಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕಾಲೇಜಿನ ಯಕ್ಷ
ರಂಜಿನಿಯ ವಿದ್ಯಾರ್ಥಿನಿ ಶ್ರೇಯಾ ಆಚಾರ್ಯ ಮುಮ್ಮೇಳದಲ್ಲಿ ಹಾಗೂ
ಭವಿಷ್ ಭಂಡಾರಿ, ಶಾಂಭವಿ ಹಾಗೂ ಯತೀನ್ ಹಿಮ್ಮೇಳದಲ್ಲಿ
ಸಹಕರಿಸಿದರು
ಕಾರ್ಯ ಕ್ರಮವನ್ನು ಕನ್ನಡ ವಿಭಾಗದ ಮುಖ್ಯಸ್ಥ ಡಾ.
ಮನಮೋಹನ.ಎಂ ಸಂಯೋಜಿಸಿದರು. ಸಂಯೋಜಕ ಗಣರಾಜ
ಕುಂಬ್ಳೆ ರಾಮಕುಂಜ ವಂದಿಸಿದರು.