ಪುತ್ತೂರು: ವಿದ್ಯಾರ್ಥಿಗಳು ವಿಷಯ ಜ್ಞಾನದ ಜೊತೆಗೆ
ಔದ್ಯೋಗಿಕ ರಂಗಕ್ಕೆ ಬೇಕಾದ ಕೌಶಲಗಳನ್ನು
ಮೈಗೂಡಿಸಿಕೊಳ್ಳಬೇಕು. ಉದ್ಯೋಗಾಕಾಂಕ್ಷಿ ವಿದ್ಯಾರ್ಥಿ
ಸಮೂಹವನ್ನು ಉದ್ಯಮರಂಗಕ್ಕೆ ಜೋಡಿಸುವ ಕೆಲಸವನ್ನು
ಉದ್ಯೋಗ ಸೇತು ಆ್ಯಪ್ ಮಾಡುತ್ತದೆ ಎಂದು ಬೆಂಗಳೂರಿನ ಕೋ-
ವರ್ಕ್ಸ ಸೊಲ್ಯುಷನ್ ಪ್ರೆöÊ.ಲಿಮಿಟೆಡ್ ನ ರಾಹುಲ್ ಜಾದವ್ ಹೇಳಿದರು.
ಇವರು ವಿವೇಕಾನಂದ ಕಲಾ, ವಿಜ್ಞಾನ ಹಾಗೂ ವಾಣಿಜ್ಯ(ಸ್ವಾಯತ್ತ)
ಕಾಲೇಜಿನ ಗಣಕ ಶಾಸ್ತç ವಿಭಾಗ ಹಮ್ಮಿಕೊಂಡಿದ್ದ ಒಂದು ದಿನದ
ಕಾರ್ಯಾಗಾರದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿ ಮಾತಾನಾಡಿದ ಕಾಲೇಜು
ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಸ್ವಾಯತ್ತ
ಕಾಲೇಜು ಹಲವು ಕಾರ್ಪೊರೇಟ್ ಕಂಪನಿಗಳ ಜೊತೆ ಮಾಡಿದ
ಒಡಂಬಡಿಕೆಗಳ ಮಹತ್ವವನ್ನು ವಿವರಿಸಿದರು. ಕಾಲೇಜಿನ ತರಬೇತಿ
ಮತ್ತು ಉದ್ಯೋಗ ಘಟಕದ ಸಂಯೋಜಕಿ ರೇಖಾ
ಪ್ರಸ್ತಾವನೆಗೈದರು.
ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ.ಶಿವಪ್ರಸಾದ್, ಗಣಕ ಶಾಸ್ತç
ವಿಭಾಗದ ಮುಖ್ಯಸ್ಥ ಪ್ರಕಾಶ್ ಕುಮಾರ್ ಪಿ ಉಪಸ್ಥಿತರಿದ್ದರು. ಅಂತಿಮ
ವರ್ಷದ ಪದವಿ ವಿದ್ಯಾರ್ಥಿಗಳು ಉದ್ಯೋಗ ಸೇತು ಆ್ಯಪ್ ನಲ್ಲಿ
ನೋಂದಣಿ ಮಾಡಿಕೊಂಡರು. ಉಪನ್ಯಾಸಕರಾದ ಸೂರ್ಯನಾರಾಯಣ
ಪಿ.ಎಸ್ ಸ್ವಾಗತಿಸಿ, ಧನಂಜಯ ವಂದಿಸಿದರು. ಪ್ರಿಯಾ ನಿರೂಪಿಸಿದರು.