News & Updates

ಚೆಸ್ ಭಾರತದ ಅತ್ಯಂತ ಪ್ರಾಚೀನ ಕ್ರೀಡೆ

ವಿದೇಶಗಳಲ್ಲೂ ಕ್ರೀಡೆಯ ಕೀರ್ತಿ ಪಸರಿಸಿ, ವಿಶ್ವಕೀರ್ತಿಯನ್ನು ಹೊಂದಿದೆ. ಇಂತಹ
ವಿಶ್ವವಿಖ್ಯಾತ ಕ್ರೀಡೆಯನ್ನು ಆಡುವ ಕೌಶಲ್ಯವನ್ನು ಅಳವಡಿಸಿಕೊಂಡವರಿಗೆ
ಬಾಲ್ಯದಲ್ಲಿಯೇ ಪ್ರೋತ್ಸಾಹಿಸುವ ಕೆಲಸವನ್ನು ವಿವೇಕಾನಂದ ಮಾಡುತ್ತಿದೆ ಎಂದು
ಪುತ್ತೂರು ಜಿ. ಎಲ್.ಆಚಾರ್ಯ ಜುವ್ಯೆಲ್ಸ್ ನ ಮಾಲಕ ಲಕ್ಷ್ಮೀಕಾಂತ ಬಿ ಆಚಾರ್ಯ
ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ಕಲಾ, ವಾಣಿಜ್ಯ, ವಿಜ್ಞಾನ
ಮಹಾವಿದ್ಯಾಲಯದ(ಸ್ವಾಯತ್ತ) ಸುವರ್ಣ ಮಹೋತ್ಸವ ವೇದಿಕೆಯಲ್ಲಿ ಕಾಲೇಜಿನ
ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ ಹಾಗೂ ಐಕ್ಯೂಎಸಿ ಇದರ
ಸಹಯೋಗದೊಂದಿಗೆ ನಡೆದ ಅಂತರ್ ಜಿಲ್ಲೆ, ಅಂತರ್ ಕಾಲೇಜು ಮಟ್ಟದ 43ನೇ
ಮಾನ್ಸೂನ್ ಚೆಸ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಚೆಸ್ ಆಟವು ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಮೆದುಳಿನ ಸರ್ವತೋಮುಖ
ಬೆಳವಣಿಗೆಗೂ ಸಹಕಾರಿಯಾಗಿದೆ. ಹೆತ್ತವರು ಲಭಿಸುವ ಸಮಯದಲ್ಲೆಲ್ಲ
ಮಕ್ಕಳನ್ನು ಚೆಸ್ ಆಟದತ್ತ ಗಮನ ಸೆಳೆಯಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವಿವೇಕಾನಂದ ಕಾಲೇಜಿನ ಆಡಳಿತ
ಮಂಡಳಿಯ ಸಂಚಾಲಕ ಮುರಳೀಕೃಷ್ಣ ಕೆ. ಎನ್ ಮಾತನಾಡಿ, ಯುದ್ಧದ ಒಂದು
ಪ್ರಕಾರವಾದ ಚದುರಂಗ ಇಂದು
ಚೆಸ್ ಆಟವೆಂದು ಮರುನಾಮಕರಣಕೊಂಡು ವಿಶೇಷವಾದ ಮಹತ್ತ್ವವನ್ನು
ಹೊಂದಿದೆ. ಹಿಂದೆ ಮನೆಮನೆಗಳಲ್ಲಿ ಆಟ ಆಡುತ್ತಿದ್ದರು.ಇಂದು ಶಿಕ್ಷಣ ಸಂಸ್ಥೆಗಳಲ್ಲಿ
ಕಲಿಸಿಕೊಡಲಾಗುತ್ತದೆ. ಮಾತ್ರವಲ್ಲದೆ ಆಟವನ್ನು ಆಡಲು ಕಲಿಸಲೆಂದೇ
ವಿಶೇಷವಾದ ತರಬೇತುದಾರರೂ ಇದ್ದಾರೆ. ಹಾಗಾಗಿ ಚೆಸ್ ಆಟದ ಮಾನ್ಯತೆ ಮತ್ತಷ್ಟು
ಹೆಚ್ಚಾಗಿದೆ ಎಂದರು.

ಚೆಸ್ ಆಟದಲ್ಲಿನ ತೀಕ್ಷ್ಣತೆಗಳು ಜೀವನಕ್ಕೆ ಪಾಠವಾಗಬೇಕು. ಆಟದಲ್ಲಿ ಎದುರಿಸುವ
ಸವಾಲುಗಳು ಜೀವನದಲ್ಲೂ ಎದುರಾಗುತ್ತವೆ. ಆಟದಲ್ಲಿ ಕಲಿತುಕೊಂಡAತಹ
ಅoಶಗಳನ್ನು ಜೀವನದೊಳಗೆ ಅಳವಡಿಸಬೇಕು ಎಂದರು.

43ನೇ ಮಾನ್ಸೂನ್ ಚೆಸ್ ಪಂದ್ಯಾಟದಲ್ಲಿ ಬಿಬಿ ಹೆಗಡೆ ಕಾಲೇಜು ಕುಂದಾಪುರದ ವಿದ್ಯಾರ್ಥಿ
ನಿಶಾಂತ್ ಡಿಸೋಜ ಪ್ರಥಮ ಸ್ಥಾನವನ್ನು, ಕುಂದಾಪುರದ ಭಂಡಾರ್ ಕಾರ್ಸ್ ಕಾಲೇಜಿನ
ವಿದ್ಯಾರ್ಥಿ ಕಾರ್ತಿಕ್ ದ್ವಿತೀಯ ಸ್ಥಾನವನ್ನು, ಎಸ್. ಡಿ. ಎಮ್ ಕಾಲೇಜು ಉಜಿರೆಯ ವಿದ್ಯಾರ್ಥಿ ಪವನ್
ಸಿ ರಾವ್ ತೃತೀಯ ಸ್ಥಾನವನ್ನು ಪಡೆದುಕೊಂಡರು. ಉತ್ತಮ ಮಹಿಳಾ ಆಟಗಾರಾರು
ಪ್ರಶಸ್ತಿಯನ್ನು ಪುತ್ತೂರು ಇಂಜಿನಿಯರ್ ಕಾಲೇಜಿನ ವಿದ್ಯಾರ್ಥಿನಿಯರಾದ ದೀಪ್ತಿ
ಲಕ್ಷ್ಮೀ ಕೆ, ಅರ್ಪಿತ ಬಾಲಚಂದ್ರ ನಾಯಕ್, ಮಡಂತ್ಯಾರಿನ ಸೇಕ್ರೆಡ್ ಹಾರ್ಟ್ ಕಾಲೇಜಿನ
ವಿದ್ಯಾರ್ಥಿನಿ ಅನಿತ ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ಪುತ್ತೂರು ಜಿ. ಎಲ್.ಆಚಾರ್ಯ ಜುವ್ಯೆಲ್ಸ್ ನ ಮಾಲಕ
ಲಕ್ಷ್ಮೀಕಾಂತ ಬಿ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು. ಹಾಗೂ ಚೆಸ್ ಟೂರ್ನಮೆಂಟ್
ನಲ್ಲಿ ತೀರ್ಪುಗಾರರಾಗಿ ಸಹಕರಿಸಿದ ಅವನಿ ಉಡುಪಿ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ರವಿಕಲಾ ಉಪಸ್ಥಿತರಿದ್ದರು.

ದೈಹಿಕ ಶಿಕ್ಷಣ ಉಪ ನಿರ್ದೇಶಕ ಯತೀಶ್ ಕುಮಾರ್ ಬಿ ಸ್ವಾಗತಿಸಿ, ದೈಹಿಕ ಶಿಕ್ಷಣ ಮುಖ್ಯ
ನಿರ್ದೇಶಕ ರವಿಶಂಕರ್ ಪ್ರಶಸ್ತಿವಿಜೇತರ ಪಟ್ಟಿಯನ್ನು ಓದಿ, ವಂದಿಸಿದರು.
ಕಾಲೇಜಿನ ಕನ್ನಡ ವಿಭಾಗದ ಉಪನ್ಯಾಸಕ ಮಧುಕುಮಾರ್ ಅವರು
ಕಾರ್ಯಕ್ರಮ ನಿರೂಪಿಸಿದರು.

Related News

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ ಉದ್ಘಾಟನಾ  ಕಾರ್ಯಕ್ರಮ-14-10-2024

ವಿವೇಕಾನಂದ ಕಾಲೇಜಿನಲ್ಲಿ ಮನೋವಿಜ್ಞಾನ ವಿಭಾಗದ ಚಟುವಟಿಕೆಗಳ…

ಪುತ್ತೂರು,ಅ.14: ಪ್ರಸ್ತುತ ದಿನಗಳಲ್ಲಿ ಮನಃಶಾಸ್ತ್ರ ವಿಭಾಗ ಹೆಚ್ಚು…

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ ಭಟ್ ಕಲ್ಲಡ್ಕ.

ನಮ್ಮತನವನ್ನು ಮರಳಿ ತರುವ ಪ್ರಯತ್ನವಾಗಲಿ; ಡಾ.ಪ್ರಭಾಕರ…

ಪುತ್ತೂರು, ಅ.೦೯: ನವರಾತ್ರಿಯ ಶುಭ ಸಂರ‍್ಭದಲ್ಲಿ ವಿವೇಕಾನಂದ…

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ: ಡಾ.ಜೀವನ್ ರಾಮ್ ಸುಳ್ಯ

ಸಾಂಸ್ಕೃತಿಕ ವಾತಾವರಣ ಇದ್ದಲ್ಲಿ ಜೀವನೋತ್ಸಾಹ ಇರುತ್ತದೆ:…

ವಿವೇಕಾನಂದ ಕಾಲೇಜಿನಲ್ಲಿ ಪ್ರತಿಭೋತ್ಸವಪುತ್ತೂರು, ಸೆ. 27: ತರಗತಿಯ…